Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಸಬ್‌ ಜೂನಿಯರ್‌ ನ್ಯಾಷನಲ್‌ ನೆಟ್‌ಬಾಲ್‌ಗೆ ಕರ್ನಾಟಕ ತಂಡ

ಬೆಂಗಳೂರು: ಹರಿಯಾಣದ ಭಿವಾನಿಯಲ್ಲಿ ಮಾರ್ಚ್‌ 22 ರಿಂದ 27ರವರೆಗೆ ನಡೆಯಲಿರುವ 27ನೇ ರಾಷ್ಟ್ರೀಯ ಸಬ್‌ ಜೂನಿಯನ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ಗೆ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡವನ್ನು ಕರ್ನಾಟಕ ಅಮೆಚೂರ್‌ ನೆಟ್‌ಬಾಲ್‌ ಅಸೋಷಿಯೇಷನ್‌ ಆಯ್ಕೆ ಮಾಡಿದೆ.

 

ಬಾಲಕರ ತಂಡ: ರೋಹಿತ್‌ ವಿ.ಎನ್.‌ (ನಾಯಕ), ಮೋಹನ್‌ ರಾವ್‌ ಟಿ.ಜೆ, (ಉಪನಾಯಕ), ಆರ್ಯ ನಾರಾಯಣ ಜಿ.ಎಲ್‌, ಸಂತೋಷ್‌ ಕುಮಾರ್‌ ಬಿ, ನಿಹಾಲ್‌ ಜಿ,, ಮೊಹಮ್ಮದ್‌ ಜಯಾನ್‌, ನಿತಿನ್‌ ನಯಾನ್‌ ಆರ್‌, ಧರ್ಷನ್‌ ರೆಡ್ಡಿ, ಮಹದೇವ ಎಂ, ಚಿರಂತ್‌ ಕೆ. ಕಟ್ಟೀಮನಿ, ಚಿರಂತನ್‌, ಆರ್ಯನ್‌ ಎ. ಶೇಠ್‌,

ಕೋಚ್:‌ ಮಹೇಶ್‌ ಬಿ.ಎನ್‌.

ಬಾಲಕಿಯರ ತಂಡ: ಶ್ರೇಯಾ ಎಂ (ನಾಯಕಿ), ಮೋಹನ್‌ ರಶಿಕ ಎಸ್‌ (ಉಪನಾಯಕಿ), ಶಮಿತ ಎಸ್‌. ಶೆಟ್ಟಿ, ಪೂಜಾ ಬಿ, ವಿಹಾ ಮಂಜುನಾಥ್‌, ಮೊನಾಲ್‌ ಆರ್‌, ಇಂದೂ ಜಿ, ತನುಷಾ ಗೌಡ ಎಂ,ಎಸ್‌,, ಸನಿಕಾ ಎ,, ಇಂದೂಶ್ರೀ ಕೆ. ಗೌಡ, ಸೌಮ್ಯ ಸಿ, ಇಂಚರ.

ಕೋಚ್:‌ ರಾಮಕೃಷ್ಣಯ್ಯ ಎನ್‌.

ಅಮೆಚೂರ್‌ ನೆಟ್‌ಬಾಲ್‌ ಅಸೋಸಿಯೇಷನ್‌ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿಯಾದ ಗಿರೀಶ್‌ ಸಿ. ಅವರು ತಂಡವನ್ನು ಪ್ರಕಟಿಸಿದ್ದಾರೆ. ಮಾರ್ಚ್‌ 10 ರಿಂದ 21ರವರೆಗೆ ತಂಡಗಳ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಕೋವಿಡ್‌ ನಿಯಮಾನುಸಾರ ಮೊದಲ ಸುತ್ತಿನ ಪಂದ್ಯವು ತಮಿಳುನಾಡು ಮತ್ತು ಕರ್ನಾಟಕ ತಂಡಗಳ ನಡುವೆ ಬೆಂಗಳೂರಿನ ರಾಜಾಜಿನಗರಲ್ಲಿರುವ ಬಸವೇಶ್ವರ ಕಾಲೇಜಿನಲ್ಲಿ ನಡೆಯಿತು. ಬಾಲಕರ ವಿಭಾಗದಲ್ಲಿ ಕರ್ನಾಟಕ ತಂಡ 31-15 ಅಂತರದಲ್ಲಿ ತಮಿಳುನಾಡು ವಿರುದ್ಧ ಜಯ ಗಳಿಸಿತ್ತು. ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವು 34-05 ಅಂತರದಲ್ಲಿ ತಮಿಳುನಾಡಿಗೆ ಸೋಲುಣಿಸಿತು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.